ಕ್ಷಮೆ ಇರಲಿ ನನಗೆ

ಘಾತಕ್ಕೊಳಗಾಗಿ ಪತರುಗುಟ್ಟುತ್ತಿದ್ದ
ನನ್ನ ನಿರಾಕಾರ ಮಾನಕ್ಕೆ
ಸೊಕ್ಕೆಂಬುದು ನೀವಿಟ್ಟ ಹೆಸರು.

ಎತ್ತೆತ್ತಲಿಂದಲೂ ನೀವೆಷ್ಟೇ ಬೆಂಕಿ ಇಟ್ಟರೂ
‘ಅದು’ ದಹಿಸಿ ಹೋಗದ್ದಕ್ಕೆ
ಕ್ಷಮೆ ಇರಲಿ ನನಗೆ.

ಗವ್ವೆನುವ
ಕತ್ತಲ ಗವಿಯೊಳಗೆ
ನನಗೆಂದೇ ಹಚ್ಚಿಟ್ಟ
ಆ ದೀಪಕ್ಕೆದುರಾದ
ವಿಲಗುಟ್ಟುವ ನನ್ನ ಮಾನ
ಸುಮ್ಮನಿದ್ದರೂ ಇರಲಾಗದೇ
ಮಿಡುಕುತ್ತಾ ಹೊಯ್ದಾಡುತ್ತಿದೆ
ಕಿಚ್ಚಿಗೆ ಬೆಂಕಿಯಾಗಿ

ಉರಿದು ಹೋಗಬಹುದಿತ್ತು….
ನುಡಿಯ ತುಂಬಿ ಬಸಿರಾಗಿ
ಇಳಿಯತೊಡಗಿದೆ ದೀಪದಾಳಕ್ಕೆ
ಮೊದಲು ಎಣ್ಣೆ ಬೋಗುಣಿಗೆ
ನಿಧಾನಕ್ಕೆ ಬತ್ತಿಗೆ
ಕೈ ಬಡಿದು ಈಜುತ್ತಾ
ಬತ್ತಿಯನ್ನೇರಿ ತುತ್ತತುದಿಗೆ
ಉರಿಯುತ್ತಿದ್ದ ಸೊಡರಿನ
ಮಧ್ಯಬಿಂದುವಿಗೆ.

ಉರಿಯಲೇಬೇಕಿದೆ ನನಗೆ
ಬೆಂಕಿಯಾಗಲ್ಲ ದೀಪವಾಗಿ
ರೆಪ್ಪೆ ಅಲುಗದಂತೆ ಉರಿಯಬೇಕಿದೆ
ದೀಪವೇ ಆಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವ್ಯಾಧ್ಯಯನ: ಮ್ಯಾಥ್ಯೂ ಅರ್ನಾಲ್ಡ್‌ನ ವಿಚಾರಗಳು
Next post ಮನ ಮಂಥನ ಸಿರಿ – ೬

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys